ಚೆಕ್ ಬೌನ್ಸ್ ಕೇಸ್.. ಕಾನೂನು ಏನ್ ಹೇಳುತ್ತೆ?

ಭಾರತದಲ್ಲಿ ಚೆಕ್ ಬೌನ್ಸ್(ಚೆಕ್ ಅನಾದರ) ಆಗುವುದು ಒಂದು ಅಪರಾಧವಾಗಿದ್ದು, ಇದು ಅನುಸಂಧಾನ ಉಪಕರಣಗಳ ಕಾಯ್ದೆ, 1881ರ ಸೆಕ್ಷನ್ 138ರ ಅಡಿಯಲ್ಲಿ ಬರುತ್ತದೆ. ಚೆಕ್ ಪಡೆದ ವ್ಯಕ್ತಿಗೆ(payee) ಕ್ರಿಮಿನಲ್ ಹಾಗೂ ಸಿವಿಲ್ ಎರಡೂ ರೀತಿಯ ಪರಿಹಾರಗಳ ಆಯ್ಕೆಗಳಿರುತ್ತವೆ. ಭಾರತದಲ್ಲಿ ಲಭ್ಯವಿರುವ ಕಾನೂನು ಕ್ರಮಗಳ ವಿವರ ಕೆಳಕಂಡಂತಿದೆ:

1. ಲೀಗಲ್ ನೋಟಿಸ್ ಕಳುಹಿಸುವುದು:

  • ಪ್ರಕರಣ ದಾಖಲಿಸುವ ಮೊದಲು ಕೈಗೊಳ್ಳಬೇಕಾದ ಕಡ್ಡಾಯ ಕ್ರಮ ಲೀಗಲ್ ನೋಟಿಸ್ ಕಳುಹಿಸುವುದಾಗಿದೆ.
  • ಚೆಕ್ ನಲ್ಲಿ ಅಗತ್ಯವಾದಷ್ಟು ಹಣವಿಲ್ಲವೆಂದು ಬ್ಯಾಂಕ್ ಮೆಮೊ ಬಂದ ನಂತರ 30 ದಿನಗಳೊಳಗೆ ಚೆಕ್ ನೀಡಿದ ವ್ಯಕ್ತಿಗೆ ನೋಟಿಸ್ ಕಳುಹಿಸಬೇಕು.
  • ನೋಟಿಸ್ ತಲುಪಿದ 15 ದಿನಗಳ ಒಳಗೆ ಚೆಕ್ ನೀಡಿದ ವ್ಯಕ್ತಿಗೆ ಹಣ ಪಾವತಿಸಲು ಅವಕಾಶವಿರುತ್ತದೆ.

2. ಕ್ರಿಮಿನಲ್ ಕೇಸ್ ದಾಖಲಿಸಿ(ಅನುಸಂಧಾನ ಉಪಕರಣ ಕಾಯ್ದೆ1881, ಸೆಕ್ಷನ್ 138 ಅಡಿ):

  • ಹಣ ಪಾವತಿಸದಿದ್ದಲ್ಲಿ ಕ್ರಿಮಿನಲ್ ದೂರನ್ನು ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ದಾಖಲಿಸಬಹುದು.
  • ಇದು ನೋಟಿಸ್ ಕಳುಹಿಸಿ 15 ದಿನ ಕಳೆದ ನಂತರದಿಂದ ಆರಂಭಗೊಂಡು, 30 ದಿನಗಳೊಳಗೆ ಸಲ್ಲಿಸಬೇಕು.
  • ಶಿಕ್ಷೆ: ಈ ಸೆಕ್ಷನ್ ಅಡಿಯಲ್ಲಿ ಅಪರಾಧಿಗೆ 2 ವರ್ಷಗಳ ಜೈಲುಶಿಕ್ಷೆ, ಅಥವಾ ಚೆಕ್ ಮೊತ್ತದ ಎರಡರಷ್ಟನ್ನು ಪಾವತಿಸುವಂತೆ ಸೂಚಿಸಬಹುದು. ಅಥವಾ ಎರಡನ್ನೂ ಅನ್ವಯಗೊಳಿಸಿದರೂ ಅಚ್ಚರಿಯಿಲ್ಲ.

3. ಹಣ ಮರಳಿ ಪಡೆಯಲು ಸಿವಿಲ್ ಸೂಟ್ ಹಾಕಿ:

  • ಕ್ರಿಮಿನಲ್ ಮೊಕದ್ದಮೆಯ ಜೊತೆಗೆ ಅಥವಾ ಬದಲಿಗೆ, ಸಿವಿಲ್ ಸೂಟ್ ಕೂಡ ದಾಖಲಿಸಬಹುದು.
  • ಹಣ ಮರಳಿ ಪಡೆಯುವವರೆಗೆ ಮಧ್ಯಂತರ ಪರಿಹಾರವನ್ನಾಗಿ ಆಸ್ತಿಯನ್ನು ಜಪ್ತಿ ಮಾಡಿಕೊಡುವಂತೆಯೂ ಕೇಳಬಹುದು.

4. ಸಿಪಿಸಿ ಆರ್ಡರ್ 37 ಅಡಿ ಸಮ್ಮರಿ ಸೂಟ್ ಸಲ್ಲಿಸಿ:

  • ಚೆಕ್ ಬೌನ್ಸ್ ಆದ ನಂತರ ತ್ವರಿತ ಹಣ ವಸೂಲಿಗಾಗಿ ಈ ಮೊಕದ್ದಮೆ ಸಲ್ಲಿಸಬಹುದು.
  • ಪ್ರಯೋಜನ: ಪ್ರತಿವಾದಿಯು ತಕ್ಷಣವೇ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಇಲ್ಲವಾದರೆ ದೂರುದಾರರ ಪರವಾಗಿ ತೀರ್ಪು ಹೊರಬೀಳಲಿದೆ.

5. ಮೋಸದ ಪ್ರಕರಣವಾಗಿದ್ದರೆ ಎಫ್ಐಆರ್ ದಾಖಲಿಸಿ ಪೊಲೀಸರ ಸಹಾಯ ಪಡೆಯಿರಿ:

  • ಹಣವಿಲ್ಲವೆಂದು ಗೊತ್ತಿದ್ದೂ ಚೆಕ್ ಕೊಟ್ಟಿದ್ದರೆ, ನೀವು IPC ಸೆಕ್ಷನ್ 406 ಅಥವಾ 420ರ ಅಡಿಯಲ್ಲಿ ಮೋಸದ ದೂರು ದಾಖಲಿಸಿ.
  • ಇದು ಚೆಕ್ ಬೌನ್ಸ್ ಪ್ರಕರಣಕ್ಕೆ ಪರ್ಯಾಯವಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಎರಡೂ ಮೊಕದ್ದಮೆಗಳು ಒಂದೇ ಸಮಯದಲ್ಲಿ ನಡೆದು ದೂರುದಾರರಿಗೇ ಜಯ ಸಿಗಬಹುದು.

📌 Section 138 ಅಡಿ ಮೊಕದ್ದಮೆ ದಾಖಲಿಸಲು ಪ್ರಮುಖ ಅಂಶಗಳು:

  • ಚೆಕ್ ಅನ್ನು ಕಾನೂನಾತ್ಮಕ ಬಾಧ್ಯತೆಯ ಪಾವತಿಗಾಗಿ ನೀಡಿರಬೇಕು.
  • ಬ್ಯಾಂಕ್ ನಿಂದ ಚೆಕ್ ಪಡೆದು ಮಾನ್ಯತೆ ಇರುವಾಗಲೇ, ಅಂದರೆ 3 ತಿಂಗಳ ಅವಧಿ ಇರುವಾಗಲೇ ಚೆಕ್ ನೀಡಿರಬೇಕು.
  • ಹಣ ಇಲ್ಲದ ಕಾರಣಕ್ಕೆ ಚೆಕ್ ಬೌನ್ಸ್ ಆಗಿರಬೇಕು.

⚖️ ಚೆಕ್ ನೀಡಿದವರ(Drawer) ರಕ್ಷಣಾ ಹಕ್ಕುಗಳು:

  • ಪಾವತಿ ಮಾಡಬೇಕಾದ ಕಾನೂನಾತ್ಮಕ ಬಾಧ್ಯತೆ ಇರಲಿಲ್ಲ ಎಂಬುದನ್ನು ಸಾಬೀತು ಮಾಡಬಹುದು.
  • ದೂರಿದಾರನಿಂದ ವಿಧಿ ವಿಧಾನದಲ್ಲಿ ತಪ್ಪು ಇರುವುದನ್ನು ತೋರಿಸಬಹುದು (ಉದಾ: ನೋಟಿಸ್ ವಿಳಂಬವಾಗಿ ತಲುಪಿದ್ದು).
  • ಬಾಹ್ಯ ನ್ಯಾಯಾಂಗ ನ್ಯಾಯಾಲಯಗಳು (Mediation / Lok Adalat) ಮೂಲಕ ಸೆಟಲ್ಮೆಂಟ್ ನಡೆಯುತ್ತಿದ್ದರೆ ಆ ಬಗ್ಗೆಯೂ ಹೇಳಬಹುದು.

Leave a Reply

Your email address will not be published. Required fields are marked *