ಟಿಪ್ಪು ಸುಲ್ತಾನ್ & ಆತನ ಸಾಧನೆಗಳು..

>ತನ್ನನ್ನು ತಾನೇ ಸುಲ್ತಾನ್ ಎಂದು ಘೋಷಿಸಿಕೊಂಡ.

>ಈತನನ್ನು ಟಿಪ್ಪು ಸಾಹಿಬ್ ಎಂದೂ ಕರೆಯಲಾಗುತ್ತಿತ್ತು.

>ಜನ್ಮಸ್ಥಳ-ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ.

>ತಂದೆ ಹೈದರ್ ಅಲಿ, ತಾಯಿ ಫಾತಿಮಾ.

>ಬಿರುದು-ಶೇರ್-ಎ-ಮೈಸೂರ್(ಮೈಸೂರ ಹುಲಿ).

>15ನೇ ವಯಸ್ಸಿನಲ್ಲಿ ತನ್ನ ತಂದೆ ಹೈದರಾಲಿ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದ.

>ದೊಡ್ಡ ಸೇನಾ ತುಕಡಿಯ ನಾಯಕನಾಗಿ 1782ರ ಫೆಬ್ರವರಿಯಲ್ಲಿ ಆಂಗ್ಲ ಸೇನಾ ನಾಯಕ ಬ್ರಾತ್‍ವೈಟ್‍ನನ್ನು ಸೋಲಿಸಿದ.

>ಅನೇಕ ಹಿಂದೂ ದೇವಾಲಯಗಳಿಗೆ ದಾನ ದತ್ತಿಗಳನ್ನು ಕೊಟ್ಟಿದ್ದ.

>ಎರಡನೇ ಆಂಗ್ಲೋ ಮೈಸೂರು ಯುದ್ಧವು ಮಂಗಳೂರು ಒಪ್ಪಂದದೊಂದಿಗೆ ಅಂತ್ಯವಾಯಿತು.

>ಮಂಗಳೂರು ಒಪ್ಪಂದ-ಗೆದ್ದಿದ್ದ ಪ್ರದೇಶ ಹಿಂದಿರುಗಿಸುವುದು &  ಖೈದಿಗಳನ್ನು ಬಿಡುಗಡೆಗೊಳಿಸುವುದು.

>ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುಗೆ ಸೋಲು, ಶ್ರೀರಂಗಪಟ್ಟಣ ಒಪ್ಪಂದ.

>ಶ್ರೀರಂಗಪಟ್ಟಣ ಒಪ್ಪಂದ- 330 ಲಕ್ಷ ರೂ. ಪರಿಹಾರ ನೀಡಿದ. ಈ ಹಣ ಕೊಡುವವರೆಗೆ ತನ್ನ ಇಬ್ಬರು  ಮಕ್ಕಳನ್ನು ಬ್ರಿಟೀಷರಿಗೆ ಒತ್ತೆ ಇಟ್ಟ.

>ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಸೋಲು & ಬ್ರಿಟೀಷರನ್ನು ಭಾರತದಿಂದ ಹೊರ ದಬ್ಬಲು ಮಾಡಿದ ತಂತ್ರವೇ ನಾಲ್ಕನೇ ಯುದ್ಧಕ್ಕೆ ಕಾರಣ.

>ನಾಲ್ಕನೇ ಯುದ್ಧದಲ್ಲೂ ಸೋತು ಟಿಪ್ಪು ಹತನಾದ

>ಮೈಸೂರನ್ನು ಗೆದ್ದಿದ್ದ ಬ್ರಿಟೀಷರು ಒಡೆಯರ್ ಅವರಿಗೆ ಹಸ್ತಾಂತರಿಸಿದರು.

>ಶ್ರೀರಂಗಪಟ್ಟಣದ ಬೇಸಿಗೆ ಅರಮನೆಯೇ-ದರಿಯಾ ದೌಲತ್

>ರೇಷ್ಮೆ ಬೆಳೆಯನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿದ.

>ಫ್ರೆಂಚರ ಸಹಾಯದೊಂದಿಗೆ ಸೈನ್ಯವನ್ನು ಆಧುನೀಕರಣಗೊಳಿಸಿದ.

>ಶೃಂಗೇರಿ ಮಠಕ್ಕೆ ದೇಣಿಗೆ ನೀಡುತ್ತಿದ್ದ.

>ಶ್ರೀರಂಗಪಟ್ಟಣ & ಬೆಂಗಳೂರಿನಲ್ಲಿ ಟಂಕ ಶಾಲೆ ತೆರೆದ.

>ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಮೊದಲ ವ್ಯಕ್ತಿ ಟಿಪ್ಪು.

>ಕುಣಿಗಲ್‍‍ನಲ್ಲಿ ಕುದುರೆ ಫಾರಂ ಸ್ಥಾಪಿಸಿದ.

>ಕೇರಳದ ಮಲಬಾರಿನ ಹೆಣ್ಣು ಮಕ್ಕಳ ಮಾನ ಮುಚ್ಚಲು ರೇಷ್ಮೆ ವಸ್ತ್ರಗಳನ್ನೇ ದಾನ ಮಾಡಿ, ಸ್ತನ ತೆರಿಗೆಯನ್ನು ರದ್ದುಗೊಳಿಸಿದ.

>ಭೂ ಕಂದಾಯ ನೀತಿಯನ್ನು ಜಾರಿಗೆ ತಂದ.

>ಬ್ರಿಟಿಷರೊಂದಿಗೆ ಹೋರಾಡಲು ನೆಪೋಲಿಯನ್ನನ ನೆರವನ್ನು ಪಡೆಯಲು ಪ್ರಯತ್ನಿಸಿ ವಿಫಲನಾದ.

Leave a Reply

Your email address will not be published. Required fields are marked *