ರೇಣುಕಾಸ್ವಾಮಿ ಬಗ್ಗೆ ಹೇಳಿದ್ದ ನಟಿ ಚಿತ್ರಾಲ್ ಗೆ ಸಂಕಷ್ಟ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯಿಂದ ನನಗೂ ಕೆಟ್ಟ ಮೆಸೇಜ್ ಬಂದಿದ್ದವು. ನಾನು ಆ ಖಾತೆಯನ್ನು ಇನ್ಸ್ಟಾದಲ್ಲಿ ಬ್ಲಾಕ್ ಮಾಡಿದ್ದೆ ಎಂದು ನಟಿ ಚಿತ್ರಾಲ್ ರಂಗಸ್ವಾಮಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವರು ನಟಿಗೆ ಮೆಸಜ್ ಮಾಡುತ್ತಿದ್ದು, ಕೆಟ್ಟದಾಗಿ ನಿಂದಿಸುತ್ತಿದ್ದಾರೆ ಎನ್ನಲಾಗಿದೆ.

‘ನೀನೆ ಬಿಕಿನಿ ಮಾಡೆಲ್. ನಿನಗೆ ಕೆಟ್ಟ ಮೆಸೇಜ್ ಮಾಡಿದ್ದಾರೆ ಎಂಬುದರಲ್ಲಿ ಅರ್ಥ ಇರುತ್ತದೆಯೇ?’ ಎಂದೆಲ್ಲಾ ಟೀಕಿಸುತ್ತಿದ್ದಾರಂತೆ. ಈ ಕುರಿತು ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಪ್ರತಿಕ್ರಿಯಿಸಿದ್ದಾರೆ.

ಅದು ಅವರ ವೃತ್ತಿ. ಏನೇ ಆದರೂ ಹೆಣ್ಣು ಮಕ್ಕಳನ್ನು ಗೌರವಿಸಬೇಕು. ಕಾಮೆಂಟ್ ಮಾಡುವವರಿಗೆ ಕೇಳುತ್ತೇನೆ, ಅವರ ಮನೆಯ ಹೆಣ್ಣು ಮಕ್ಕಳಿಗೆ ಕೆಟ್ಟ ಸಂದೇಶ ಕಳುಹಿಸಿದರೆ ಸುಮ್ಮನೆ ಇರುತ್ತಾರೆಯೇ? ಇದು ತಪ್ಪು. ಅದನ್ನು ಅರ್ಥ ಮಾಡಿಕೊಳ್ಳಿ, ಆಕೆಯನ್ನು ನಿಂದಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *