ಕರ್ನಾಟಕದ ಮುಂದಿನ ಸಿಎಂ ಇವರೇನಂತೆ!

ಲಿಂಗಾಯತ, ಒಕ್ಕಲಿಗ ಸಮುದಾಯದ ನಾಯಕರಿಗೆ ಸಿಎಂ ಪಟ್ಟ ಬಿಟ್ಟುಕೊಡಬೇಕೆಂಬ ಕೂಗು ಕೇಳಿಬರುತ್ತಿರುವ ನಡುವೆ ಸಚಿವ ಸತೀಶ್ ಜಾರಕಿಹೊಳಿ(Sathish jarakiholi) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿ, ಚುನಾವಣೆ ನಡೆದ ಆರಂಭದಲ್ಲಿ ಸಿಎಂ, ಡಿಸಿಎಂ ಯಾರಾಗಬೇಕೆಂಬ ಬಗ್ಗೆ ಕೂಗು ಕೇಳಿಬಂದಿತ್ತು. ಆದರೆ ಇದೀಗ ಆ ಸ್ಥಾನಗಳನ್ನು ಭಾರ್ತಿ ಮಾಡಿದ್ದು, ಖಾಲಿ ಇಲ್ಲ. ಹಾಗಾಗಿ ಅವುಗಳು ಸದ್ಯಕ್ಕೆ ಮುಗಿದ ಅಧ್ಯಾಯ. ಈ ಬಗ್ಗೆ ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಈ ವೇಳೆ, 2028ರಲ್ಲಿ ನಾನೇ ಸಿಎಂ ಆಗಬೇಕೆಂಬ ಅಭಿಲಾಷೆ ಇದೆ. ಆ ಸಮಯದಲ್ಲಿ ಸಂದರ್ಭ ಹೇಗಿರಲಿದೆ ಎಂಬುದನ್ನು ನೋಡಿಕೊಂಡು ಸಿಎಂ ಸ್ಥಾನಕ್ಕೆ ಬೇಡಿಕೆ ಇಡುತ್ತೇನೆ ಎಂದಿದ್ದಾರೆ. ಈ ಮುಖೇನ ಎರಡೂವರೆ ವರ್ಷದ ಸಿಎಂ ಸ್ಥಾನದ ಹಂಚಿಕೆ ವಿಫಲವಾದರೆ ಮುಂದೆ ನಾನೇ ಸಿಎಂ ಗಾಡಿ ಏರಬೇಕು ಎಂದುಕೊಂಡಿರುವ ಡಿಸಿಎಂ ಡಿಕೆಶಿಗೆ ಸತೀಶ್ ಜಾರಕಿಹೊಳಿ ಪೈಪೋಟಿ ಕೊಡುವ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *