ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ & ಕೊಡುಗೆಗಳು..

ನಾಲ್ವಡಿ ಕೃಷ್ಣರಾಜ ಒಡೆಯರ್(1902-1940):

>ತಾಯಿ-ಕೆಂಪ ನಂಜಮ್ಮಣ್ಣಿ.

>ಆಡಳಿತದಲ್ಲಿ ಎಲ್ಲಾ ವರ್ಗದವರಿಗೂ ಅವಕಾಶ ಸಿಗಲೆಂದು ಜಸ್ಟಿಸ್ ಲೆಸ್ಲಿ ಮಿಲ್ಲರ್ ಆಯೋಗ ರಚಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು?

>ಬ್ರಾಹ್ಮಣರು, ಆಂಗ್ಲೋ ಇಂಡಿಯನ್ನರನ್ನು ಹೊರತುಪಡಿಸಿ ಉಳಿದ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಶೇ.75ರಷ್ಟು ಮೀಸಲಾತಿ ನೀಡಲು ಆದೇಶಿಸಿದರು. ಹಾಗಾಗಿ ಇವರನ್ನು “ಮೀಸಲಾತಿಯ ಜನಕ” ‘ಸಾಮಾಜಿಕ ಕಾನೂನುಗಳ ಹರಿಕಾರ’ ಎನ್ನಲಾಗುತ್ತದೆ.

>ಮಿಲ್ಲರ್ ಆಯೋಗ ಜಾರಿಯಾದ ಪರಿಣಾಮ ಕಾಂತರಾಜೇ ಅರಸ್ ದಿವಾನರಾದರು. ಜಾತಿ ಆಧಾರಿತ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು.

>ಮುನಿಸಿಪಾಲಿಟಿ & ಗ್ರಾಮ ಪಂಚಾಯತ್ ರಚನೆಯಾದವು.

>ವಾಣಿ ವಿಲಾಸ ಸಾಗರ(1907) & KRS ನಿರ್ಮಾಣ(1911)

>ಶಿವನಸಮುದ್ರದ ಬಳಿ ಕಾವೇರಿ ನದಿಯಲ್ಲಿ ಜಲವಿದ್ಯುತ್ ಉತ್ಪಾದನೆ ಮಾಡಿದರು. ಪರಿಣಾಮ 1905 ಆ.3ರಂದು ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು. ಇದು ಏಷ್ಯಾ & ಭಾರತದ ಮೊದಲ ಜಲ ವಿದ್ಯುತ್ ಕೇಂದ್ರವಾಗಿತ್ತು.

>ಪ್ರಾಥಮಿಕ & ಮಾಧ್ಯಮಿಕ ವಿದ್ಯಾಭ್ಯಾಸ ಉಚಿತ, ಕಡ್ಡಾಯ ಎಂದು ಆದೇಶಿಸಿದರು.

>ಮೈಸೂರು ವಿವಿ(1916) ಸ್ಥಾಪನೆ.

>ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಸೇರಿ 270 ಉಚಿತ ಸರ್ಕಾರಿ ಆಸ್ಪತ್ರೆಗಳ ಆರಂಭ.

>ಅಸ್ಪೃಶ್ಯರಿಗಾಗಿಯೇ ಹುಸ್ಕೂರು ಹಾಗೂ ಟಿ.ನರಸೀಪುರದಲ್ಲಿ ಶಾಲೆಗಳ ಆರಂಭ.

>1902ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯಶಾಲೆ ಪ್ರಾರಂಭ.

>ಬೆಂಗಳೂರಿನಲ್ಲಿ ವಿಜ್ಞಾನ ಸಂಸ್ಥೆ ತೆರೆಯಲು ಜೆ.ಎನ್.ಟಾಟಾ ಅವರಿಗೆ 371 ಎಕರೆ ಜಾಗ & 5 ಲಕ್ಷಕ್ಕೂ ಹೆಚ್ಚು ಹಣ ನೀಡಿದರು.

>ಮೈಸೂರು ಅರಮನೆಯನ್ನು 1910ರಲ್ಲಿ ಪೂರ್ಣಗೊಳಿಸಿದರು.

>ಸ್ತ್ರೀಯರಿಗೂ ಮತದಾನದ ಹಕ್ಕು ಕೊಟ್ಟರು.

>ನಾಲ್ವಡಿ ನೇತೃತ್ವದ ಮೈಸೂರು ರಾಜ್ಯವನ್ನು ಮಹಾತ್ಮ ಗಾಂಧಿ “ರಾಮ ರಾಜ್ಯ” ಎಂದು ಕರೆದರು. ನಾಲ್ವಡಿ ಅವರನ್ನು ರಾಜರ್ಷಿ ಎಂದೂ ಕರೆದರು.

Leave a Reply

Your email address will not be published. Required fields are marked *