ಮೈಸೂರು ಸಂಸ್ಥಾನವು ರಾಜ್ಯವನ್ನು 1399ರಿಂದ 1950ರವರೆಗೆ ಆಡಳಿತ ನಡೆಸಿತು. ಇದರ ಆರಂಭದ ಅರಸ ಯದುರಾಯ, ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್. ಈ ಸಂಸ್ಥಾನವು 1565ರವರೆಗೆ ವಿಜಯನಗರ ಸಾಮ್ರಾಜ್ಯದ ಸಾಮಂತವಾಗಿತ್ತು. 18ನೇ ಶತಮಾನದಲ್ಲಿ ಹೈದರ್ ಆಲಿ ಹಾಗೂ ಅವನ ಮಗ ಟಿಪ್ಪು ಸುಲ್ತಾನ್ ಒಡೆಯರರನ್ನು ಗದ್ದುಗೆಯಿಂದ ಇಳಿಸಿದ್ದರು. 1881ರಲ್ಲಿ ಮೈಸೂರು ಬ್ರಿಟೀಷರ ಮೂಲಕ ಮತ್ತೆ ಮೈಸೂರು ರಾಜರಿಗೆ ದಕ್ಕಿತು. ಈ ರಾಜ್ಯವನ್ನು ಒಟ್ಟು ಮಂದಿ 25 ದೊರೆಗಳು & 24 ದಿವಾನರು ಮುನ್ನಡೆಸಿದರು.
>ಮೈಸೂರು ಒಡೆಯರ ಮೊದಲ ದೊರೆ-ಯದುರಾಯ & ಕೃಷ್ಣರಾಯ
>ಲಾಂಛನ-ಗಂಡಭೇರುಂಡ.
>ಆರಂಭಿಕ ರಾಜಧಾನಿ- ಶ್ರೀರಂಗಪಟ್ಟಣ
>ಅಧಿದೇವತೆ-ಚಾಮುಂಡೇಶ್ವರಿ
̧>1610ರಲ್ಲಿ ಮೈಸೂರು ದಸರಾ ಆರಂಭಿಸಿದವರು-ರಾಜ ಒಡೆಯರ್
ಚಿಕ್ಕದೇವರಾಜ ಒಡೆಯರ್(ನವಕೋಟಿನಾರಾಯಣ/ಕರ್ನಾಟಕ ಚಕ್ರವರ್ತಿ/ಅಪ್ರತಿಮ ವೀರ/ತೆಂಕಣ ರಾಜ/ರಾಜಾ ಜಗದೇವ/ಮಹಾರಾಷ್ಟ್ರ ಭೂಪಾಲ ಜಗರಿಪು):
>9 ಕೋಟಿ ಚಿನ್ನದ ಪಗೋಡ ಸಂಗ್ರಹಿಸಿ “ನವಕೋಟಿ ನಾರಾಯಣ” ಎನಿಸಿಕೊಂಡರು.
>18 ಶಾಖೆಗಳ ಅಠಾರ ಕಚೇರಿ ತೆರೆದವರು-ಚಿಕ್ಕದೇವರಾಜ ಒಡೆಯರ್.
>ಔರಂಗಜೇಬನ ಆಸ್ಥಾನಕ್ಕೆ ರಾಯಭಾರಿ ಕಳುಹಿಸಿದ್ದರು.
>̧1687ರಲ್ಲಿ 3 ಲಕ್ಷ ಚಿನ್ನದ ವರಹ ನೀಡಿ ಮೊಘಲರಿಂದ ಬೆಂಗಳೂರನ್ನು ಖರೀದಿಸಿದ್ದರು.
>ಕೃತಿಗಳು: ಗೀತಗೋಪಾಲ & ಚಿಕ್ಕದೇವರಾಜ ಬಿನ್ನಪಂ
>ಇವರ ಮರಣದ ಬಳಿಕ ದಳವಾಯಿಗಳು ಅಧಿಕಾರಕ್ಕೆ ಬಂದರು.