ಶಾಕಿಂಗ್ ಹೇಳಿಕೆ ನೀಡಿದ ನಟಿ ತನಿಷಾ ಕುಪ್ಪಂಡ

ಬೆಂಗಳೂರು: ಹತ್ಯೆಗೊಳಗಾದ ರೇಣುಕಾಸ್ವಾಮಿ ಎಷ್ಟು ಜನರಿಗೆ ಅಶ್ಲೀಲ ಸಂದೇಶ ರವಾನಿಸಿ ಮಾನಸಿಕವಾಗಿ ಸಾಯಿಸಿದ್ದಾನೆ ಎಂದು ಇಂದು ಯಾರೂ ಮಾತನಾಡುತ್ತಿಲ್ಲ. ಏಕೆಂದರೆ ಆ ವ್ಯಕ್ತಿ ಇಂದು ಜೀವಂತವಾಗಿಲ್ಲವೆಂದು ನಟಿ ತನಿಷಾ ಕುಪ್ಪಂಡ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುವವರಿಗಿಂತ ಬ್ಲಾಕ್ ಮಾಡಿರುವವರ ಖಾತೆಗಳ ಸಂಖ್ಯೆಯೇ ಹೆಚ್ಚಿದೆ. ರೇಣುಕಾಸ್ವಾಮಿ ಅವರಂತಹ ಸಾಕಷ್ಟು ಮಂದಿ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ಅಂಥವರೆಲ್ಲರನ್ನೂ ಬ್ಲಾಕ್ ಮಾಡಿದ್ದೇನೆ.

ಅಶ್ಲೀಲ ಸಂದೇಶ ಕಳುಹಿಸಿ, ಕಾನೂನು ಕೈಗೆತ್ತಿಕೊಳ್ಳುವ ಯಾರಿಂದಲೋ ಸಾಯುವುದಕ್ಕಿಂತ ಉತ್ತಮ ನಡವಳಿಕೆಯೊಂದಿಗೆ ತಮ್ಮ ಹೆಂಡತಿ, ಮಕ್ಕಳೊಂದಿಗೆ ಸುಖವಾಗಿ ಬದುಕಿ ಎಂದು ನಟಿ ಕಿವಿಮಾತನ್ನು ಹೇಳಿದ್ದಾರೆ.

2 thoughts on “ಶಾಕಿಂಗ್ ಹೇಳಿಕೆ ನೀಡಿದ ನಟಿ ತನಿಷಾ ಕುಪ್ಪಂಡ

Leave a Reply

Your email address will not be published. Required fields are marked *