ನನ್ನ ಪತ್ನಿಗೆ ನಿವೇಶನ ಕೊಟ್ಟಿದ್ದು ಬಿಜೆಪಿ ಸರ್ಕಾರವೇ: ಸಿದ್ದರಾಮಯ್ಯ

ಮೈಸೂರು: ತಮ್ಮ ಪತ್ನಿ ಪಾರ್ವತಿ ಅವರಿಗೆ ಮುಡಾ ನಿವೇಶನ ಹಂಚಿಕೆ ಮಾಡಿರುವ ಸಂಬಂಧ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ನನ್ನ ಪತ್ನಿಗೆ ನನ್ನ ಬಾಮೈದಾ ಮಲ್ಲಿಕಾರ್ಜುನ 1997ರಲ್ಲಿ ಹರಿಶಿನ ಕುಂಕುಮ ಎಂಬ ಅರ್ಥದಲ್ಲಿ 3 ಎಕರೆ 16 ಗುಂಟೆ ಜಮೀನನ್ನು ನೀಡಿದ್ದ. ಡಿನೋಟಿಫಿಕೇಶನ್ ಮಾಡಿದ್ದ ಸರ್ಕಾರ, ಇದನ್ನು ವಶಪಡಿಸಿಕೊಂಡಿತ್ತು. ಇದಕ್ಕೆ ಬದಲಾಗಿ 2021ರ ಅಕ್ಟೋಬರ್ ನಲ್ಲಿ 50:50 ಅಳತೆಯ ನಿವೇಶನವನ್ನು ಸರ್ಕಾರವೇ ನೀಡಿತ್ತು. ಅದು ಕೂಡ ಬಿಜೆಪಿ ಸರ್ಕಾರದ ಅವಧಿ ವೇಳೆಯೇ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿರುವುದು ತಿಳಿದಿರುವ ವಿಚಾರವೇ.

Leave a Reply

Your email address will not be published. Required fields are marked *