H D Revanna: ಒಕ್ಕಲಿಗ ಸ್ವಾಮೀಜಿ ವಿರುದ್ಧ ರೇವಣ್ಣ ಗರಂ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯನ್ನು ಡಿಸಿಎಂ ಡಿಕೆಶಿ ಅವರಿಗೆ ಬಿಟ್ಟುಕೊಡಬೇಕು ಎಂಬ ಚಂದ್ರಶೇಖರ್ ಸ್ವಾಮೀಜಿ ಅವರ ಹೇಳಿಕೆಯನ್ನು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಖಂಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ಯಾರನ್ನಾದರೂ ಸಿಎಂ ಮಾಡಿಕೊಳ್ಳಲಿ ನಮಗೆ ಬೇಕಿಲ್ಲ. ಸಿಎಂ ಹುದ್ದೆ ನಮ್ಮ ಬಳಿ ಇಲ್ಲ, ಕಾಂಗ್ರೆಸ್ ಬಳಿ ಇದೆ. ಅವರದ್ದು ರಾಷ್ಟ್ರೀಯ ಪಕ್ಷ, ಯಾರನ್ನಾದರೂ ಸಿಎಂ ಮಾಡಲಿ ಬಿಡಿ ಎಂದು ಪರೋಕ್ಷವಾಗಿ ಸಿಎಂ ಪರ ಬ್ಯಾಟ್ ಬೀಸಿದರು.

ಹೇಳಿಕೆ ನೀಡಿರುವ ಸ್ವಾಮೀಜಿ ಯಾವ ಮಟ್ಟದಲ್ಲಿದ್ದರು ಎಂದು ನಾವು ಕಣ್ಣಾರೆ ಕಂಡಿದ್ದೇವೆ. ಹೆಚ್.ಡಿ.ದೇವೇಗೌಡರು ಸ್ವಾಮೀಜಿ ಹಾಗೂ ಮಠಕ್ಕೆ ಎಷ್ಟೆಲ್ಲಾ ಸಹಾಯ, ಸೇವೆ ಮಾಡಿದ್ದರು ಎಂಬುವುದು ಗೊತ್ತಿದೆ. ದೇವೇಗೌಡರ ಬಗ್ಗೆ ಸಚಿವ ರಾಜಣ್ಣ ಮಾತನಾಡಿದ್ದಾಗ ಈ ಸ್ವಾಮೀಜಿ ಎಲ್ಲಿಗೆ ಹೋಗಿದ್ದರು? ಯಾವತ್ತಾದರೂ ಅವರು ದೇವೇಗೌಡರ ಪರ ಮಾತನಾಡಿದ್ರಾ? ಹಾಗಂತ ದೇವೇಗೌಡರ ಪರ ಮಾತನಾಡಲಿ ಎಂದು ತಾವು ಬಯಸುತ್ತಿಲ್ಲ. ಕನಿಷ್ಠ ಪಕ್ಷ ಸಮಾಜದ ಮುಖಂಡರು ಅಂತಾದ್ರೂ ಮಾತನಾಡಬೇಕಿತ್ತಲ್ವಾ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *