ಕರ್ನಾಟಕ ಸರ್ಕಾರಿ ನೌಕರರಿಗಾಗಿ ವಿಧಿಸಲಾಗಿರುವ ಸಾಮಾನ್ಯ ನಿಯಮಗಳ ಮಾಹಿತಿ ಇಲ್ಲಿದೆ. ಇವು ಮುಖ್ಯವಾಗಿ ಕರ್ನಾಟಕ ಸಿವಿಲ್ ಸರ್ವೀಸ್ ನಿಯಮಾವಳಿ(KCSR) ಮತ್ತು ನಡವಳಿಕೆ ನಿಯಮಗಳು-1966ರ ಅಡಿಯಲ್ಲಿ ರೂಪಿಸಲಾಗಿದೆ:
1. ನೇಮಕಾತಿ ಮತ್ತು ನೇಮಕ:
- ಸರ್ಕಾರಿ ನೌಕರರ ನೇಮಕಾತಿಯು ಕರ್ನಾಟಕ ಸಿವಿಲ್ ಸರ್ವೀಸ್(ಸಾಮಾನ್ಯ ನೇಮಕಾತಿ) ನಿಯಮಗಳಂತೆ ನಡೆಯುತ್ತದೆ.
- ಮೀಸಲಾತಿ ನೀತಿಗಳು ಎಸ್ಸಿ/ಎಸ್ಟಿ, ಓಬಿಸಿ, ಮಹಿಳೆಯರು & ಮಾಜಿ ಸೈನಿಕರಿಗೆ ಅನ್ವಯಿಸುತ್ತವೆ.
- KPSC ನಡೆಸುವ ಪರೀಕ್ಷೆ, ಸಂದರ್ಶನದ ಮೂಲಕ ನೇಮಕಾತಿ ಮಾಡಿ, ಅದರ ಆಧಾರದ ಮೇಲೆಯೇ ಪದೋನ್ನತಿಯನ್ನೂ ನೀಡಲಾಗುತ್ತದೆ.
2. ಪ್ರೊಬೇಷನರಿ ಅವಧಿ:
- ಹೊಸದಾಗಿ ನೇಮಕಗೊಂಡ ನೌಕರರು 2 ವರ್ಷಗಳ ಪ್ರೊಬೇಷನರಿ ಅವಧಿಯಲ್ಲಿ ಸೇವೆ ಸಲ್ಲಿಸಬೇಕು.
- ಈ ಅವಧಿಯಲ್ಲಿ ನೌಕರರ ಕಾರ್ಯಕ್ಷಮತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ.
- ನೌಕರನ ಸೇವೆಯು ಅಸಮಾಧಾನಕರವಾಗಿದ್ದರೆ ಪ್ರೊಬೇಷನರಿ ಅವಧಿಯನ್ನು ವಿಸ್ತರಿಸಬಹುದು ಅಥವಾ ಸೇವೆಯಿಂದ ಹೊರದೂಡಲ್ಪಡಬಹುದು.
3. ನಡವಳಿಕೆ ನಿಯಮಗಳು:
ನೌಕರರು ಕೆಳಗಿನ ನಿಯಮಗಳನ್ನು ಪಾಲಿಸಬೇಕು:
- ಪ್ರಾಮಾಣಿಕತೆ, ನಿಷ್ಠೆಯಿಂದ ನಡೆಸದುಕೊಂಡು ಶಿಸ್ತು ಕಾಪಾಡಬೇಕು.
- ಸಾರ್ವಜನಿಕ ಸೇವೆಯಲ್ಲಿ ಪಕ್ಷಪಾತ ಮಾಡದೆ ಸೇವೆ ಮಾಡಬೇಕು.
- ರಾಜಕೀಯ ಚಟುವಟಿಕೆಗಳಿಂದ ದೂರವಿರಬೇಕು.
- ಸಾರ್ವಜನಿಕವಾಗಿ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಬಾರದು.
- ಮೇಲಧಿಕಾರಿಗಳ ಕಾನೂನುಬದ್ಧ ಆದೇಶಗಳನ್ನು ಪಾಲಿಸಬೇಕು.
4. ಕೆಲಸದ ವೇಳೆ & ಕರ್ತವ್ಯ:
- ಕಚೇರಿಯ ನಿಗದಿತ ಸಮಯವನ್ನು ಪಾಲಿಸಬೇಕು.
- ತಡವಾಗಿ ಹಾಜರಾಗುವುದು ಮತ್ತು ನಿರಂತರವಾಗಿ ತಡವಾಗಿ ಬರುತ್ತಿದ್ದರೆ ಅದನ್ನು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
- ಕಚೇರಿಯಲ್ಲಿ ಸೇವೆ ಮಾಡುವ ಅವಧಿಯಲ್ಲಿ ಖಾಸಗಿ ಉದ್ಯೋಗ ಅಥವಾ ಕೆಲಸ ಮಾಡುವಂತಿಲ್ಲ.
5. ರಜೆ ನಿಯಮಗಳು:
ನೌಕರರು ಈ ಕೆಳಗಿನ ರಜೆಗಳನ್ನು ಪಡೆಯಲು ಅರ್ಹರಿರುತ್ತಾರೆ:
- ಸಾಮಾನ್ಯ ರಜೆ (CL)
- ಸಂಪಾದಿತ ರಜೆ (EL)
- ವೈದ್ಯಕೀಯ ರಜೆ
- ಮಾತೃತ್ವ/ಪಿತೃತ್ವ ರಜೆ
- ಅನುಮತಿಯನ್ನು ಪಡೆದು ಅಧ್ಯಯನ ರಜೆಯನ್ನೂ ಕೂಡ ತೆಗೆದುಕೊಳ್ಳಲು ನಿಮಯಮಾನುಸಾರ ಅವಕಾಶವಿದೆ.
6. ಆಸ್ತಿ ಘೋಷಣೆ:
- ನೌಕರರು ಪ್ರತಿವರ್ಷ ತಮ್ಮ ಚರಾಸ್ತಿ & ಸ್ಥಿರ ಆಸ್ತಿಗಳ ಬಗ್ಗೆ ಘೋಷಣೆ ಮಾಡಬೇಕು.
- ಸ್ಥಿರ ಆಸ್ತಿ ಖರೀದಿ/ಮಾರಾಟ ಮಾಡುವ ಮುನ್ನ ಸರ್ಕಾರದಿಂದ ಅನುಮತಿ ಪಡೆಯಬೇಕು.
7. ಶಿಸ್ತು ಕ್ರಮ:
ಅಶಿಸ್ತಿನಿಂದ ನಡೆದುಕೊಂಡರೆ ಈ ಕ್ರಮಗಳು ಜಾರಿಗೆ ಬರುತ್ತವೆ:
- ವಾರ್ನಿಂಗ್ ನೀಡಬಹುದು.
- ಅಮಾನತು ಮಾಡಬಹುದು.
- ಬಡ್ತಿ ಅಥವಾ ವೇತನ ಹೆಚ್ಚಳವನ್ನು ತಡೆಯಬಹುದು.
- ಸೇವೆಯಿಂದ ವಜಾ ಮಾಡಬಹುದು.
ಇವುಗಳ ಬಗ್ಗೆ ಕರ್ನಾಟಕ ಸಿವಿಲ್ ಸರ್ವೀಸ್ (ವರ್ಗೀಕರಣ, ನಿಯಂತ್ರಣ ಮತ್ತು ಮನವಿ) ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
8. ನಿವೃತ್ತಿ & ಪಿಂಚಣಿ:
- ಸಾಮಾನ್ಯ ನಿವೃತ್ತಿ ವಯಸ್ಸು 60 ವರ್ಷಕ್ಕೆ ಮಿತಿಗೊಳಿಸಲಾಗಿದೆ.
- ಕನಿಷ್ಠ ಅರ್ಹ ಸೇವೆಯ ನಂತರ ಪಿಂಚಣಿ ಸೌಲಭ್ಯಗಳು ಅನ್ವಯಿಸುತ್ತವೆ.
- 20 ವರ್ಷಗಳ ಸೇವೆಯ ನಂತರ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಬಹುದು.
9. ವರ್ಗಾವಣೆ:
- ಸರ್ಕಾರವು ನೌಕರರನ್ನು ಆಡಳಿತಾತ್ಮಕ ಅವಶ್ಯಕತೆ ಆಧಾರದ ಮೇಲೆ ವರ್ಗಾವಣೆ ಮಾಡುವ ಹಕ್ಕನ್ನು ಹೊಂದಿರುತ್ತದೆ.
- ನೌಕರರು ವರ್ಗಾವಣೆಗೆ ಮನವಿ ಮಾಡಿಕೊಳ್ಳಬಹುದು. ಆದರೆ ಅಂತಿಮ ನಿರ್ಧಾರವನ್ನು ಇಲಾಖೆ ಕೈಗೊಳ್ಳಲಿದೆ.
10. ಪದೋನ್ನತಿ(ಬಡ್ತಿ):
- ಜೇಷ್ಠತೆ, ಅರ್ಹತೆ ಮತ್ತು ಇಲಾಖಾ ಪರೀಕ್ಷೆಗಳ ಆಧಾರದಲ್ಲಿ ಪದೋನ್ನತಿ ನೀಡಲಾಗುತ್ತದೆ.
- ನೌಕರನ ಅರ್ಹತೆ ಬಗ್ಗೆ ಇಲಾಖಾ ಆಯ್ಕೆ ಸಮಿತಿಗಳು ಪರಿಶೀಲಿಸುತ್ತವೆ.